ಮನುಷ್ಯರು ಕಷ್ಟ, ಸಂಕಟಗಳ ಕೋಟಲೆಯಲ್ಲಿ ಸಿಕ್ಕಾಗ 'ಅಯ್ಯೋ, ನಾನೇನು ತಪ್ಪು ಮಾಡಿದ್ದೆ? ನನಗೇಕೆ ಹೀಗಾಯಿತು?' ಎನ್ನುವುದುಂಟು. ಮನುಷ್ಯರಿಗೆ ಬರುವ ದುಃಖ ಸಂಕಟಗಳೂ, ನೋವು ನರಳಾಟಗಳೂ ಅವರು ಮಾಡಿದ್ದ ತಪ್ಪುಗಳಿಂದ ಅಥವಾ ಪಾಪಕೃತ್ಯಗಳಿಂದ ಉಂಟಾಗುವಂಥದು ಎನ್ನುವ ನಂಬಿಕೆಯು. ವೈಜ್ನಾನಿಕ ವಿಚಾರಧಾರೆಯ ಬೆಳಕಿನಲ್ಲಿ ಬೆಳೆದವರಿಗೆ 'ಗತಿಸಿಹೋದ ಗೊಡ್ಡು ಧರ್ಮದ ಮೂಢನಂಬಿಕೆ ' ಎಂದೆಲ್ಲ ಅನಿಸಬಹುದು. ಆದರೆ ಕೇಸೀಯ ಅಸಂಖ್ಯ ಹೇಳಿಕೆಗಳಲ್ಲಿ ದುಃಖಕ್ಕೂ, ಪಾಪಕೃತ್ಯ್ಗಳಿಗೂ ಕಾರ್ಯಕಾರಣ ಸಂಬಂಧವಿದೆ. ಮಾಡಿದ ಪಾಪದ ಮೂಲವಾದರೋ ಸಾಮಾನ್ಯ ದೃಷ್ಟಿಗೆ ಅಥವಾ ಸಾಮಾನ್ಯ ಮನಸ್ಸಿನ ಜಾಗೃತ ಪರಿಧಿಗೆ ನಿಲುಕದಂಥದ್ದು. ಅಗೋಚರವಾದುದು ಅಷ್ಟೆ.
ಪಾಪ ಮತ್ತು ದುಃಖಗಳ ಕಾರ್ಯಕಾರಣಗಳನ್ನು ತಿಳಿಸುವ ಏಕೈಕ ಪದವೇ ಕರ್ಮ.
Subscribe to:
Post Comments (Atom)
1 comment:
haudu edu nijavadaddu
Post a Comment